ಸ್ಥಾಪನೆ: 1991
ಬಸವ ವೇದಿಕೆ (ರಿ)
ಹಿನ್ನೋಟ

ಬೆಂಗಳೂರಿನ ವಿಚಾರವಂತ ಸಹೃದಯಿಗಳು ಬಸವಾದಿ ಶರಣರ ವಿಚಾರಗಳನ್ನು ಅರಿತುಕೊಂಡು,ಅವುಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಪ್ರಚಾರ ಮಾಡಲು ಒಂದು ಸಂಘಟನೆಯ ಅಗತ್ಯವನ್ನು ಮನಗಂಡರು. ತ್ರಿಕಾಲಾಬಾದಿತವಾದ ಶರಣರ ಮೌಲ್ಯಗಳನ್ನು ಜನರಿಗೆ ಮುಟ್ಟಿಸುವ ಉದ್ದೇಶವನ್ನು ರೂಪಿಸಿಕೊಂಡರು. ಶರಣರ ವೈಚಾರಿಕ ಹಾಗೂ ಜಾಗೃತ ಮನೋಭಾವ ಹೊಂದಿದವರನ್ನು , ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಿರುವ ಮಹನೀಯರನ್ನು ಗುರುತಿಸಿ ಬಸವ ಜಯಂತಿ ಅಚರಣೆಯ ಸಮಾರಂಭದಲ್ಲಿ ಗೌರವಿಸುವ ಒಂದು ವಿನಮ್ರ ಪ್ರಯತ್ನವು ಬಸವ ವೇದಿಕೆ ಅಶ್ರಯದಲ್ಲಿ ಅತ್ಯಂತ ಯಶಸ್ವಿಯಾಗಿ ಮುಂದುವರೆದುಕೋಂಡು ಬರುತ್ತಿದೆ.

ಬಸವಣ್ಣನವರೇ ಮೊದಲಾದ ಶರಣರ ವಿಚಾರದಾರೆಗಳನ್ನು ವ್ಯಾಪಕವಾಗಿ ಪ್ರಚಾರ ಮಾಡುವ ದಿಟ್ಟ ಮಾರ್ಗವನ್ನು ಹಾಗೂ ಪ್ರಯತ್ನಶೀಲ ಹೆಜ್ಜೆ ಗುರುತುಗಳನ್ನು ಬಸವ ವೇದಿಕೆಯು ದಾಖಲಿಸುತ್ತಿದೆ. ಶರಣರ ಸತ್ಯ ಶುದ್ಧ ಸಂದೇಶಗಳ ಪರಿಪಾಲನೆಯ ಸಾಧನೆಗಾಗಿ ಬಸವ ವೇದಿಕೆಯು ಶರಣ ಸಂಸ್ಕೃತಿಯ ಒಂದು ಕ್ರಿಯಾತ್ಮಕ ಚಲನಶೀಲ ಸಂಸ್ಥೆಯಾಗಿ 1991 ರಲ್ಲಿ ಸ್ಥಾಪನೆಗೊಂಡಿತು. ಈ ವೇದಿಕೆಯ ಸ್ಥಾಪನೆ, ಕಾರ್ಯಯೋಜನೆಗಳ ಪರಿಕಲ್ಪನೆ ಮೂಡಿದ್ದು ಸಾಹಿತಿ, ಉನ್ನತ ಐ‌ಎ‌ಎಸ್ ಅದಿಕಾರಿ, ಜನಪ್ರಿಯ ವಾಗ್ಮಿ, ವಚನದಲ್ಲಿ ಅದ್ದಿದ ಮನಸ್ಸುಳ್ಳ ಡಾ. ಸಿ. ಸೋಮಶೇಖರ ಅವರಿಂದ. ಬೆಂಗಳೂರಿನಲ್ಲಿ ಬಸವ ಜಯಂತಿ ಆಚರಣೆಗೆ ಒಂದು ವಿಸ್ತೃತವಾದ ವಿಶಾಲತೆಯನ್ನು ಒದಗಿಸಿರುವ ಹೆಮ್ಮೆ ಇವರಿಗೆ ಹಾಗೂ ಬಸವ ವೇದಿಕೆಗೆ ಸಲ್ಲುತ್ತದೆ.

ಡಾ. ಸಿ. ಸೋಮಶೇಖರ ಅವರು ಮಂಡಿಸಿರುವ ಮಹಾ ಪ್ರಬಂದ ‘ವಚನಗಳಲ್ಲಿ ಸಾಮಾಜಿಕ ಚಿಂತನೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಡಿಲಿಟ್ ಪದವಿಯನ್ನು ಪ್ರದಾನ ಮಾಡಿದೆ. ವಚನ ಸಾಹಿತ್ಯವು ಅವರ ಬದುಕಿನ ನಡೆ-ನುಡಿಗಳಲ್ಲಿ ಹಾಸು ಹೊಕ್ಕಾಗಿರುವುದನ್ನು ಸಹ ನಾವು ಗುರುತಿಸಬಹುದಾಗಿದೆ. ವಚನ ಸಾಹಿತ್ಯದ ಪ್ರಚಾರ ಕಾರ್ಯವು ಅವರಿಂದ ನಿರಂತರವಾಗಿ ನಡೆಯುತ್ತಿದೆ. ತಮ್ಮ ಅದಿಕಾರದ ಅವದಿಯಲ್ಲಿಯೇ ಸಾಹಿತ್ಯ ಚಿಂತನೆ ಹಾಗೂ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅವರಿಗೆ ವಿಶೇಷ ಆಸಕ್ತಿ. ಅದರಲ್ಲಿಯೂ ವಿಶೇಷವಾಗಿ ವಚನಸಾಹಿತ್ಯದ ಬಗ್ಗೆ ಅವರು ನಡೆಸಿದ ದೀರ್ಘ ಅಧ್ಯಯನ ಹಾಗೂ ಅನುಭಾವದ ಪಲಶೃತಿಯೇ ಬಸವವೇದಿಕೆಯ ಸ್ಥಾಪನೆಗೆ ಮೂಲ ಪ್ರೇರಣೆ. ಬಸವ ವೇದಿಕೆ ನಡೆಸುವ ಕಾರ್ಯಕ್ರಮಗಳು ತಮ್ಮ ವೈಭವಕ್ಕೆ ಹಾಗೂ ಅರ್ಥಪೂರ್ಣತೆಗೆ ಪ್ರಸಿದ್ಧಿಯಾಗಿವೆ. ಬೆಂಗಳೂರಿನಲ್ಲಿ ಪ್ರತಿವರ್ಷವೂ ನಡೆಯುತ್ತಿರುವ ಕಾರ್ಯಕಮಗಳು ಜನಮಾನಸದಲ್ಲಿ ಸವಿನೆನಪಿನ ಅಚ್ಚೊತ್ತುತ್ತಾ ಬಂದಿವೆ. ಸಮಾರಂಭಗಳಲ್ಲಿನ ಅಚ್ಚುಕಟ್ಟುತನ, ಭಾಗವಹಿಸುವ ಪ್ರಖ್ಯಾತ ಸಾಹಿತಿಗಳು, ಕಲಾವಿದರು, ಹಿರಿಯ ಮುತ್ಸದ್ದಿಗಳು ಸಬೆ-ಸಮಾರಂಭಗಳ ಗಾಂಬೀರ್ಯವನ್ನು ಹೆಚ್ಚಿಸಿದ್ದಾರೆ, ತಮ್ಮ ಅಪಾರ ಮೆಚ್ಚುಗೆಯನ್ನು ಸೂಚಿಸಿ ಪೋತ್ಸಾಹಿಸಿದ್ದಾರೆ. ಸಾಂಸ್ಕೃತಿಕ ವಿಶಿಷ್ಟ ಕಾರ್ಯಕ್ರಮಗಳು ಪದೇ ಪದೇ ಮೆಲುಕುಹಾಕುವಂತೆ ಎಲ್ಲರ ನೆನಪಿನಲ್ಲಿ ಉಳಿದುಕೊಂಡಿವೆ. ಬಸವ ವೇದಿಕೆಯು ತನ್ನ ಬಹುಮುಖ್ಯ ಆಶಯದಂತೆ 1996 ರಿಂದ ನಾಡಿನ ಸೇವಾ ಗಣ್ಯರಿಗೆ ‘ಬಸವಶ್ರೀ’ ಪ್ರಶಸ್ತಿಯನ್ನು ನೀಡುತ್ತಾ ಬರುತ್ತಿದೆ. 1997 ರಿಂದ ಶರಣ ಸಾಹಿತ್ಯ, ಸಂಸ್ಕೃತಿಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯಾತಿಗಣ್ಯರನ್ನು ಗುರುತಿಸಿ ‘ವಚನಸಾಹಿತ್ಯಶ್ರೀ ಪ್ರಶಸ್ತಿಯನ್ನೂ ನೀಡಲು ತನ್ನ ಸಂಪ್ರದಾಯವನ್ನು ಇಮ್ಮಡಿಗೊಳಿಸಿಕೊಂಡಿದೆ. ಇಂದಿನ ಆದುನಿಕ ಬದುಕು ಎದುರಿಸುತ್ತಿರುವ ಮೌಢ್ಯ ಹಾಗೂ ಸ್ವಾರ್ಥತೆಯನ್ನು ಪ್ರತಿರೋದಿಸಲು ಬೇಕಾದ ಉತ್ತರ ಮತ್ತು ಸ್ಥೈರ್ಯಗಳನ್ನು ತುಂಬಿಕೊಡುವ ಮಾರ್ಗದಲ್ಲಿ ಬಸವ ವೇದಿಕೆಯು ನಿರಂತರವಾಗಿ ಪಯತ್ನಿಸುತ್ತಿದೆ.

ಪ್ರೊ.   ಟಿ. ಆರ್. ಮಹಾದೇವಯ್ಯ
ಹಿರಿಯ ಸಾಹಿತಿಗಳು

somasekhara

ಡಾ. ಸಿ. ಸೋಮಶೇಖರ ಐ‌ಎ‌ಎಸ್(ನಿ)
ಸಂಸ್ಥಾಪಕರು ಹಾಗೂ ಅಧ್ಯಕ್ಷರು
ಬಸವ ವೇದಿಕೆ, ಬೆಂಗಳೂರು

ಕಾಯಕ ಹಾಗೂ ದಾಸೋಹ ತತ್ವಗಳ ಮೂಲಕವೇ ಮನುಕುಲದ ಮಹತ್ವವನ್ನು ಎತ್ತಿ ಹಿಡಿದ ಶರಣ ಪರಂಪರೆಯು ಜಾತಿ ಮತ್ತು ವರ್ಗರಹಿತ ಸಮಾಜದ ಸ್ಥಾಪನೆಗಾಗಿ ಹನ್ನೆರಡನೆಯ ಶತಮಾನದಲ್ಲಿ ಮಾಡಿದ ಪ್ರಯತ್ನವು ಆದುನಿಕ ಜಾಗತಿಕ ಇತಿಹಾಸದಲ್ಲೊಂದು ಮಹತ್ತರ ಅಧ್ಯಾಯ. ವಿಶ್ವಮಾನವ ಸಂತತಿಯು ಎಲ್ಲ ರೀತಿಯ ಬೇದ ಬಾವಗಳನ್ನು, ಅಸಮಾನತೆಗಳನ್ನು ತೊಡೆದುಹಾಕಿ ಸರ್ವಸಮಾನತೆ ಮತ್ತು ಸಹಬಾಳ್ವೆಗಳ ಬುನಾದಿಯ ಮೇಲೆ ಸುಂದರವೂ, ಸುಶೀಲವೂ ಆದ ಸಮೃದ್ಧ ಬದುಕನ್ನು ಸಮರ್ಥವಾಗಿ ಕಟ್ಟಿಕೊಂಡು ತನ್ಮೂಲಕ ಜನ್ಮವನ್ನು ಸಾರ್ಥಕಪಡಿಸಿಕೊಳ್ಳುವುದಕ್ಕಾಗಿ ಹಚ್ಚಿದ ಜಗತ್ತಿನ ಜ್ಯೋತಿಯೇ ಬಸವಜ್ಯೋತಿ, ವಚನಜ್ಯೋತಿ.

ವಿಶ್ವ ನೆತೃತ್ವದ ನೆಲೆಗಟ್ಟಿನಲ್ಲಿ ಸಾಮಾಜಿಕ, ದಾರ್ಮಿಕ ಮತ್ತು ಆರ್ಥಿಕ ಸುಧಾರಣೆಯನ್ನು ಕಂಡುಕೊಳ್ಳಬೇಕಾದ ನಿಟ್ಟಿನಲ್ಲಿ ಬಸವಾದಿ ಶರಣರ ತತ್ವಸಿದ್ಧಾಂತಗಳು ಕಾಂತಿಕಾರಿ ಎನಿಸಿಕೊಳ್ಳುವಷ್ಟರ ಮಟ್ಟಿಗೆ ಸಾರ್ವಕಾಲಿಕವಾದ ಮಹತ್ವವನ್ನು ಪಡೆದುಕೊಂಡಿರುವ ದಾರಿ ದೀಪಗಳಾಗಿವೆ.

‘ಸಕಲ ಜೀವಾತ್ಮರಿಗೂ ಲೇಸನೇ ಬಯಸುವ ದರ್ಮ ಮಾನವ ದರ್ಮ ಎಂದು ಪ್ರತಿಪಾದಿಸಿದ ಬಸವಣ್ಣನವರು ಮುಂದುವರೆದು ಈ ದರ್ಮದ ಮೂಲವೇ ದಯೆ, ದಯೆಯಿಲ್ಲದ ದರ್ಮವೂ ಒಂದು ದರ್ಮವೇ..?! ಎಂಬ ಸಾರ್ವತಿ ಕ ಸತ್ಯವನ್ನು ಮುಕ್ತವಾಗಿ ಸಾರಿ ಜಾತಿಮತಗಳಿಗೆ ಅತೀತವಾಗಿರುವ ಮಾನವ ದರ್ಮವೇ ಸರ್ವಶ್ರೇಷ್ಠ ಎಂಬ ಸತ್ಯವನ್ನು ಸಾರುವ ಮೂಲಕ ತಾವು ಜೀವಿಸಿದ್ದ ಕಾಲಘಟ್ಟಕ್ಕಿಂತಲೂ ಶತಶತಮಾನಗಳಾಚೆಗೆ ಜಿಗಿದು ಶಾಶ್ವತವಾಗಿ ಜನಮಾನಸದಲ್ಲಿ ನೆಲೆಗೊಂಡುಬಿಟ್ಟರು.

ದಿನೇ ದಿನೇ ಸಂಕೀರ್ಣಗೊಳ್ಳುತ್ತಿರುವ ಮಾನವೀಯ ಭಾವನೆಗಳು, ವರ್ತನೆಗಳು ಮತ್ತು ಬಾಂಧವ್ಯಗಳನ್ನು ಪುನರುದ್ದೀಪನಗೊಳಿಸಿ ವಿಶ್ವವ್ಯಾಪಿಯಾಗಿ ಮನುಕುಲದ ಬದುಕನ್ನು ಸಹನೀಯವಾಗಿಸುವ ನಿಟ್ಟಿನಲ್ಲಿ ನಿರ್ಣಾಯಕ ಪಾತ್ರವಹಿಸಿರುವ ವಚನ ಸಾಹಿತ್ಯ ಮತ್ತು ಶರಣ ಸಾಹಿತ್ಯಗಳು ಸಮಾಜದ ಪುನರನಿರ್ಮಾರ್ಣಕ್ಕೆ ಶರಣ ಪರಂಪರೆಯು ನಡೆಸಿದ ಬಹುದೊಡ್ಡ ಸಾಹಿತ್ಯಿಕ, ಸಾಮಾಜಿಕ ಕ್ರಾಂತಿಯೆನಿಸಿದ್ದು ಇಂದಿಗೂ ತನ್ನ ಪ್ರಭಾವವನ್ನು ಅಚ್ಚಳಿಯದೆ ಉಳಿಸಿಕೊಂಡಿದೆ. ಹೀಗಾಗಿ ಬಸವಾದಿ ಶರಣರ ಜೀವವಾಣಿಯು ಇಡೀ ವಿಶ್ವದಲ್ಲಿ ಕನ್ನಡ ಬಾಷೆಯ ಅಕ್ಷರಗಳ ಮೂಲಕವೇ ಅಕ್ಷಯವಾಗಿದ್ದು ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಪಸ್ತುತವೂ ಆಪ್ತವೂ ಆಗುತ್ತಿದ್ದು ಅನುಬವ ಮತ್ತು ಅನುಬಾವಗಳ ಸಮತೋಲಿತ ಸಂಯೋಗದಿಂದಾಗಿ ಉನ್ನತ ಮಟ್ಟದ ಸತ್ಯ, ನ್ಯಾಯ ದರ್ಮಗಳ ನೆಲೆಗಟ್ಟಿನಲ್ಲಿ ನೀತಿವಂತ ಬದುಕನ್ನು ಕಟ್ಟಿಕೊಳ್ಳಲು ಸರಳವಾದ, ಸುಲಭವಾದ ಮಾರ್ಗದರ್ಶಿಗಳಾಗಿ ಅಮರವಾಗಿವೆ.


ಬಸವಶ್ರೀ ಪ್ರಶಸ್ತಿ ಪುರಸ್ಕೃತರು

ಡಾ. ಬಿ.ಡಿ ಜತ್ತಿಯವರು 1996
ಶ್ರೀ ಎಸ್.ನಿಜಲಿಂಗಪ್ಪನವರು 1997
ಡಾ. ಎಂ. ಸಿ ಮೋದಿಯವರು 1998
ಶ್ರೀ ಕೆ.ಎಂ. ನಂಜಪ್ಪನವರು 1999
ಡಾ. ದೇ. ಜವರೇಗೌಡರವರು 2000
ಡಾ. ಎಚ್. ನರಸಿಂಹಯ್ಯನವರು 2001
ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲ್ ರವರು 2002
ಡಾ. ಚಂದ್ರಶೇಖರ ಕಂಬಾರರವರು 2003
ಡಾ. ಡಿ.ಎಂ ನಂಜುಂಡಪ್ಪನವರು 2004
ನಾಡೋಜ ಡಾ. ಪಾಟೀಲ ಪುಟ್ಟಪ್ಪನವರು 2005
ನ್ಯಾಯಮೂರ್ತಿ ಡಾ. ವಿ.ಎಸ್. ಮಳಿಮಠರವರು 2006
ಪದ್ಮಶ್ರೀ ಡಾ. ಎಸ್. ಪಿ ಬಾಲಸುಬ್ರಹ್ಮಣ್ಯಂರವರು 2007
ರಾಷ್ಟ್ರಕವಿ ಡಾ.ಜಿ.ಎಸ್ ಶಿವರುದ್ರಪ್ಪನವರು 2008
ಡಾ. ವೀರೇಂದ್ರ ಹೆಗ್ಗೆಡೆಯವರು 2009
ಡಾ. ಸುಧಾಮೂರ್ತಿಯವರು 2010
ನಾಡೋಜ ಏಣಗಿ ಬಾಳಪ್ಪನವರು 2011
ನಾಡೋಜ ಡಾ.ಚನ್ನವೀರಕಣವಿಯವರು 2012
ಡಾ. ಎಂ.ಎಂ ಕಲಬುರ್ಗಿಯವರು 2013
ಭಾರತರತ್ನ ಡಾ.ಸಿ.ಎನ್.ಆರ್.ರಾವ್ 2014
ನಾಡೋಜ ಡಾ.ಜಿ.ವೆಂಕಟಸುಬ್ಬಯ್ಯನವರು 2015
ಡಾ. ವಿಜಯ ಸಂಕೇಶ್ವರ ರವರು 2016

ವಚನ ಸಾಹಿತ್ಯಶ್ರೀ ಪ್ರಶಸ್ತಿ ಪುರಸ್ಕೃತರು

ಡಾ. ಸಿ.ಪಿ. ಕೃಷ್ಣಕುಮಾರ್ ರವರು 1997
ಡಾ. ಎಸ್. ವಿದ್ಯಾಶಂಕರ ರವರು 1998
ಡಾ. ಎಂ. ಚಿದಾನಂದ ಮೂರ್ತಿಯವರು 1999
ಪ್ರೊ . ಟಿ.ಆರ್. ಮಹಾದೇವೆಯ್ಯನವರು 2000
ಡಾ. ಎಸ್.ಆರ್. ಗುಂಜಾಳ್‌ರವರು 2001
ಶ್ರೀ ರಂಜಾನ್ ದರ್ಗಾರವರು 2002
ಡಾ. ಶೈಲಜಾ ಉಡೆಚಣರವರು 2003
ಡಾ. ಸಾ.ಶಿ. ಮರುಳಯ್ಯನವರು 2004
ಶೀ ಇಬ್ರಾಹೀಮನ . ಸುತಾರರವರು 2005
ಶ್ರೀಮತಿ ಲೀಲಾದೇವಿ ಆರ್. ಪ್ರಸಾದ್ ರವರು ಹಾಗೂ ಡಾ. ಅಜಯಕುಮಾರ್ ಸಿಂಹ ರವರು 2006
ವಾಙ್ಞಯತಪಸ್ವಿ ಶ್ರೀ ಕುಮಾರ ನಿಜಗುಣರವರು 2007
ಡಾ. ಜಯಶ್ರೀ ದಂಡಯೆವರು 2008
ಶ್ರೀ ಪಂಡಿತ ವೆಂಕೆಟೇಶ್‌ಕುಮಾರ್ ರವರು 2009
ಪೆ . ಜಿ.ಎಸ್. ಸಿದ್ದಲಿಂಗಯ್ಯ ನವರು 2010
ಡಾ. ವೀಣಾ ಬನ್ನಂಜಯೆವರು 2011
ಶ್ರೀಮತಿ ಕಸ್ತೂರಿ ಶಂಕರ್‌ರವರು 2012
ಡಾ. ಜಿ.ವಿ. ಜಯಾ ರಾಜಶೇಖರ್‌ರವರು 2013
ಡಾ. ಲತಾ ರಾಜಶೇಖರ್‌ರವರು ಹಾಗೂ ಡಾ. ಆರ್. ಶಿವಣ್ಣನವರು 2014
ಕೆ .ಸಿ.ಶಿವಪ್ಪನವರು ಹಾಗೂ ಶ್ರೀಮತಿ ಸಂಗೀತ ಕಟ್ಟಿರವರು 2015
ಪ್ರೊ. ಜಿ. ಹೆಚ್. ಹನ್ನೆರಡುಮಠ ಮತ್ತು ಡಾ. ಮಂಗಳಾ ಪ್ರಿಯದರ್ಶಿನಿ 2016